
Archive for the 'India' Category
KANTARA FOR OSCARS
December 22, 2022ಧ್ವಜಾರೋಹಣ
August 16, 2022Erudite scholar Sri KS Narayanacharya no more
November 26, 2021ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸ, ಭಾರತೀಯ ಸಂಸ್ಕೃತಿಯ ಪ್ರವಚನ ಹರಿಕಾರ ಡಾ.ಕೆ.ಎಸ್.ನಾರಾಯಣಾಚಾರ್ಯರು ಇಂದು ಪ್ರಾತಃಕಾಲ ಶ್ರೀಹರಿಯ ಚರಣ ಸೇರಿದರು. ರಾಮಾಯಣಸಹಸ್ರಶ್ರೀ, ಗೀತಾರತ್ನನಿಧಿ, ರಾಮಾಯಣ ಪಾತ್ರ ಪ್ರಪಂಚ,ಅಗಸ್ತ್ಯ, ಶ್ರೀಮಾತೇ ಕುಂತಿ ಕರೆದಾಗ, ಚಾಣಕ್ಯ ನೀತಿ ಸೂತ್ರಗಳು, ಶ್ರೀರಾಮಾವತಾರ ಸಂಪೂರ್ಣವಾದಾಗ, ವನದಲ್ಲಿ ಪಾಂಡವರು, ದಶಾವತಾರ ಇನ್ನು ಹಲವಾರು 100ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿರುವುದಲ್ಲದೇ ವಿವಿಧ ಪತ್ರಿಕೆ ಮತ್ತು ವಾರಪತ್ರಿಕೆಗಳಲ್ಲಿನ ಅಂಕಣ, ಬರಹಗಳು, ಪ್ರವಚನಗಳು ಮತ್ತು ವಿವಿಧ ಮಾಧ್ಯಮಗಳ ಚರ್ಚೆಯಗಳಲ್ಲಿ ನಮ್ಮ ನಾಡು, ನುಡಿ, ಸಂಸ್ಕೃತಿ, ಸಂಪ್ರದಾಯ ಮತ್ತು ಸಂಸ್ಕಾರಗಳ ಬಗ್ಗೆ ಆಧಿಕಾರಯುತವಾಗಿ ಆರ್ಥಪೂರ್ಣ ವಿಷಯಗಳನ್ನು ಪ್ರತಿಪಾದಿಸುವ ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಕನ್ನಡ, ಸಂಸ್ಕೃತ, ತಮಿಳು, ಇಂಗ್ಲೀಷ್ ಭಾಷಾ ಕೋವಿದರ ದೇಹಾಂತ್ಯವು ಸಾಹಿತ್ಯವಲಯಕ್ಕೆ ದುಃಖ ತಂದಿದೆ. ಅವರ ಕೃತಿಗಳ ಮೂಲಕ ಸದಾಕಾಲ ಅವರು ಅವರು ನನಪಿನಲ್ಲಿ ಉಳಿಯಲಿದ್ದಾರೆ.
ಆಚಾರ್ಯರಿಗೆ ಶಿರಸಾ ನಮಾಮಿ
ಮನಸಾ ಸ್ಮರಾಮಿ
ದುಃಖತೃಪ್ರ ಓದುಗ
ರಾಮಕೃಷ್ಣ ಬೆಳ್ಳೂರು
Foremost scholar of Indology ( author of 400+ books in Kannada & English ), Professor Dr. K.S. Narayanacharya, an erudite scholar of Ramayana no more.
Pravachanakalanidhi, Sri Ramayanacharya, Vedabhushana, Mahabharathacharya, Bhagavathacharya, Panditharaja Sriyutha Dr.K.S.Narayanacharya attained Acharyan Thiruvadi at 2:06 am 26-11-2021.
Sri Narayanacharya’s mastery over the religious texts and his sharp memory even at the age of 88 was mind-blowing. It was our sukrutha listening to the intricate details he gave about the Vedas, Puranas, Samhitas, Upanishads, Itihasa, Kavya, sacred scriptures, the mythological and historical characters between the lectures. The audience loved it when he connected the historical/ mythological events/ characters to contemporary events/ characters, esp. to politics.
Below message from Sri KSN’s family:
It is with the greatest regret * we are saddened to inform all his ardent followers that Acharyan Dr Ubhaya Vedanta Pravartakarar – KS Narayanacharya – our very beloved father attained Acharyan Thiruvadi. At 2:06 am 26-11-2021
K S NARAYANACHAR Family 😢😢😢🙏🏻🙏🏻🙏🏻🙏🏻
Below message from Sri Venkatesh, ardent follower of Acharya:
ಆಚಾರ್ಯರ ಕುಟುಂಬಕ್ಕೆ, ಶಿಷ್ಯ ವೃಂದ ಹಾಗೂ ಅಭಿಮಾನಿಗಳಿಗೆ ಭರಿಸಲಾಗದ ದುಃಖ. ಇಂದು ಶ್ರೀ ವೈಷ್ಣವ ಸಾರಸ್ವತ ಲೋಕದಲ್ಲಿ ಧ್ರುವತಾರೆ ಅಸ್ತಂಗತವಾಗಿ ದಾರಿ ತೋರಿಸುವ ದೀವಿಟಿಗೆ ನಂದಿಹೋದಂತಾಗಿದೆ. ಆದರೆ ಅವರು ನಮಗೆ ನೀಡುರುವ ಉಪನ್ಯಾಸಗಳು ಭಗವದ್ವಿಷಯ ಕಾಲಕ್ಷೇಪ ಗ್ರಂಥಗಳು ಮತ್ತು ರಾಷ್ಟ್ರೀಯ ವಿಚಾರಧಾರೆ ಅಪಾರವಾದ ಕೊಡುಗೆಗಳು ಅಜರಾಮರವಾಗಿ ಇರಲಿದೆ. ಅವರ ಅಗಲಿಕೆ ಸತ್ಸಂಪ್ರದಾಯಕ್ಕೆ ಭರಿಸಲಾಗದ ಅಪಾರವಾದ ನಷ್ಟ ಉಂಟಾಗಿದೆ. ಅಂತಿಮವಾಗಿ ಶ್ರೀಸೀತಾರಾಮ ಪಾದುಕಾ ಸೇವೆಯನ್ನು ಮಾಡುವ ಸಲುವಾಗಿ ಶಾಶ್ವತವಾಗಿ ಪರಂಧಾಮಕ್ಕೆ ಮರಳಿದ್ದಾರೆ. ಅವರಿಗೆ ಇಹಲೋಕದಲ್ಲಿ ನಮ್ಮಂತಹ ಸಾಮಾನ್ಯ ಜನರಿಗೆ ಸನ್ಮಾರ್ಗ ತೋರಲೆಂದೇ ಈ ಧರೆಯಲ್ಲಿ ಅವತರಿಸಿದ ಮಹೋನ್ನತ ವ್ಯಕ್ತಿತ್ವದ ಆಚಾರ್ಯರು. ಅದರಲ್ಲೂ ಸುಲಲಿತವಾದ ರಸದೌತಣವಾದ ಕನ್ನಡದಲ್ಲಿ ಭಗವದ್ವಿಷಯ ಮೃಷ್ಟಾನ್ನದ ಭೋಜನದ ರುಚಿ ಯನ್ನು ನಮಗೆಲ್ಲ ತೋರಿಸಲೆಂದೇ ಈ ಧರೆಯಲ್ಲಿ ಅವತರಿಸಿದ ನಿತ್ಯಸೂರಿಗಳು. ಅವರಗಲಿಕೆಯು ಇನ್ನು ಅನೇಕ ಕೃತಿಗಳ ಬರವಣಿಗೆ ಕೆಲಸಗಳು, ಉಪನ್ಯಾಸ ಕಾರ್ಯಕ್ರಮಗಳು, ಮತ್ತು ಮುಖ್ಯವಾಗಿ ಅಂತಿಮವಾಗಿ ಅಯೋಧ್ಯೆ ಶ್ರೀ ರಾಮ ದೇಗುಲದ ಆವರಣದಲ್ಲಿ ಶ್ರೀರಾಮಾಯಣ ಪ್ರವಚನ ಕೇಳಲು ಕಾದಿದ್ದ ಶ್ರೀರಾಮಚಂದ್ರ ಸ್ವಾಮಿಗೂ ಪರಿವಾರದವರಿಗೂ ನಿರಾಸೆ ಮೂಡಿರುವುದರಲ್ಲಿ ಸಂದೇಹವೇ ಇಲ್ಲ. ಇದುವೇ ತುಂಬಲಾರದ ನಷ್ಟ.
Corona! को रो ना – रो को ना
March 9, 2020***
WFH = WORK FROM HOME
WFH = WORK FOR HOTTEPAADU
WFH = WORK FROM HAROHALLI
***
***
ಆದಿ ಅಕ್ಷರಿ ಕೊರೋನಾ
ರಚನೆ : ರಾಮಕೃಷ್ಣ ಬೆಳ್ಳೂರು
ಕೊಡುವವ ಕೊಟ್ಟಾಗ ಕೇಳಲಿಲ್ಲ ನೀನು
ರೋಧಿಸುವೆ ಈಗ ಪರಿಸ್ಥಿತಿ ಮಿತಿಮೀರಿದೆಯೆಂದು ನೀನು
ನಾಕ ನರಕ ಎಲ್ಲ ಇಲ್ಲೇ ಅನುಭವಿಸು ನೀನು
***
ಅಂತ್ಯಾಕ್ಷರಿ ಕೊರೋನಾ!
ರಚನೆ : ರಾಮಕೃಷ್ಣ ಬೆಳ್ಳೂರು
ಜೀವನಶೈಲಿಯಲ್ಲಿ ನೇಮ ನಿಷ್ಠೆ ಇಲ್ಲದಿದ್ದರೆ. ತಿಳಿದುಕೊ
ಪ್ರಪಂಚದ ಅದೋಗತಿ ಕಣ್ಣ ಮುಂದೆ ಕಾಣಿರೋ
ಏನು ಮಾಡುವುದು! ನಾವೆಲ್ಲಾ ಪ್ರಕೃತಿಗೆ ಉಲ್ಟಾ ಹೊಡುಯುವ ಜಮಾನಾ!
ಭೂದೇವಿ ಒಮ್ಮೆ ನಿಟ್ಟುಸಿರು ಬಿಟ್ರೆ ಹಾರಿ ಹೋಗತ್ತೆ ಮಾಸ್ಕ್!
Click to enlarge
ಕೊರೋನಾ one-liners!
ರಚನೆ: ರಾಮಕೃಷ್ಣ ಬೆಳ್ಳೂರು
ಈ ನಡುವೆ ಎಲ್ಲಿ ನೋಡಿದ್ರು ಮುಖವಾಡ ಧರಿಸಿರೋರೆ ಕಾಣಿಸ್ತಿದಾರೆ !
ನಾನು ಯಾವತ್ತೂ ಮುಖವಾಡ ಧರಿಸಿಲ್ಲ. ಕೊರೋನಾ ಬಂದಾಗ್ಲೂ!
ಕೊರೋನಾ ಬಂದಾಗ ಯಾವ ಜ್ಯುಸ್ ಕುಡಿಬೇಕು? ಮಾಸ್ಕ್ ಮೆಲನ್.
ಸಾಬ್ರಿಗೂ ಕೊರೋನಾಗು ಏನ್ ಕಾಮನ್? ಮಾಸ್ಕ್.
ಕಥೆ ಕಾದಂಬರಿ ಓದೋರಿಗೆ ಕೊರೋನಾ ಇಷ್ಟ – ಬಿಕಾಸ್ ಇಟೀಸ್ ನಾವಲ್!
ದೊಡ್ಡ ವಿದ್ವಾಂಸರಿಗೂ ಕೊರೋನಾಗು ಏನ್ ಸಂಬಂಧ? ಕೋವಿದ್!
ಕೊರೋನಾ ಬಂತು ಅಂತ ಕೈ ತೊಳ್ಕೊಂಡ್ರಾಗಲ್ಲ!
ಮೇಡ್ ಇನ್ ಚೈನಾ ಎಲ್ಲರಿಗೂ ಬೇಕು. ಆದ್ರೆ ಈ ಮೇಡ್ ಇನ್ ಚೈನಾ ಚೈನಾದವರಿಗೇ ಬೇಡ!
WALL & AGARWAL! Bangalore Boys!
November 16, 2019FRONT PAGES OF NEWSPAPER (10th Nov. 2019) ANNOUNCING AYODHYA VERDICT
November 11, 2019Love in and around Jammu-Kashmir-Ladakh
August 6, 2019ಆಟ ಪರದಾಟ
June 23, 2019ಆಟ ಪರದಾಟ
ರಚನೆ: ರಾಮಕೃಷ್ಣ ಬೆಳ್ಳೂರು
ಅಫ್ಘಾನಿಸ್ತಾನದಲ್ಲಿರುವ ಕಂದಹಾರ
ಗಾಂಧಾರಿಯ ತವರೂರಾದ ಗಾಂಧಾರ
ಅವಳ ವಂಶ ನಿರ್ವಂಶ ಮಾಡಿಸಿದ್ದಕ್ಕೆ
ಗಾಂಧಾರಿ ಇತ್ತಳು ಕೃಷ್ಣನಿಗೆ ಶಾಪ
ಇದರಿಂದ ಪರಮಾತ್ಮ ನಕ್ಕನೆ ಹೊರತು
ಆಗಲಿಲ್ಲ ಅವನಿಗೆ ಕೋಪ
ನಿನ್ನೆಯ ಪಂದ್ಯದ ನಂತರ ಕುಳಿತರು
ಅಫ್ಘಾನಿಸ್ತಾನದವರು ಬೇಸತ್ತು
ಏಕೆಂದರೆ ಗಾಂಧಾರಿ ಕೊಟ್ಟ ಶಾಪದ ಗಾಳಿ
ನಿನ್ನೆಯ ಪಂದ್ಯದ ಮೇಲೆ ಬೀಸಿತ್ತು
ಆದುದರಿಂದ ಕುರುಕ್ಷೇತ್ರವಾಯಿತು ನಿನ್ನೆಯ ಆಟ
ಗೆಲ್ಲುವ ಹೊತ್ತಿಗೆ ಆಗಿತ್ತು ಮಹಾ’ಭಾರತ’ಕ್ಕೆ ಪರದಾಟ.