Archive for the 'Sanskrit' Category

Tribute to Dr. KS Narayanacharya by RK Bellur

November 26, 2021

Erudite scholar Sri KS Narayanacharya no more

I can still hear the powerful voice of Sri Acharya, chanting the below Sri Hayagreeva stotra, before his lecture:

श्रीमान् वेङ्कटनाथार्यः कवितार्किककेसरी ।
वेदान्ताचार्यवर्यो मे सन्निधत्तां सदा हृदि ॥
ज्ञानानन्द मयं देवं निर्मलस्फटिकाकृतिम् ।
आधारं सर्व विद्यानां हयग्रीवम् उपास्महे ॥

Shriman Venkatnarthaye Kavitakirkkesari
Vedantacharyavaryo me Sannidhatam sada Hradi |
jñānānanda mayaṁ devaṁ nirmalasphaṭikākṛtim |
ādhāraṁ sarva vidyānāṁ hayagrīvam upāsmahe || 1 ||

[Meditate upon the Supreme Being, Sri Hayagriva, the embodiment of knowledge. Sri Hayagriva is an integrated form of knowledge and bliss. The one with the face and neck of a horse and who has a radiant, sparkling body like a pure white crystal, he is the abode of all learning. He is the first God of all knowledge.]

Erudite scholar Sri KS Narayanacharya no more

November 26, 2021

ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸ, ಭಾರತೀಯ ಸಂಸ್ಕೃತಿಯ ಪ್ರವಚನ ಹರಿಕಾರ ಡಾ.ಕೆ.ಎಸ್.ನಾರಾಯಣಾಚಾರ್ಯರು ಇಂದು ಪ್ರಾತಃಕಾಲ ಶ್ರೀಹರಿಯ ಚರಣ ಸೇರಿದರು. ರಾಮಾಯಣಸಹಸ್ರಶ್ರೀ, ಗೀತಾರತ್ನನಿಧಿ, ರಾಮಾಯಣ ಪಾತ್ರ ಪ್ರಪಂಚ,ಅಗಸ್ತ್ಯ, ಶ್ರೀಮಾತೇ ಕುಂತಿ ಕರೆದಾಗ, ಚಾಣಕ್ಯ ನೀತಿ ಸೂತ್ರಗಳು, ಶ್ರೀರಾಮಾವತಾರ ಸಂಪೂರ್ಣವಾದಾಗ, ವನದಲ್ಲಿ ಪಾಂಡವರು, ದಶಾವತಾರ ಇನ್ನು ಹಲವಾರು 100ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿರುವುದಲ್ಲದೇ ವಿವಿಧ ಪತ್ರಿಕೆ ಮತ್ತು ವಾರಪತ್ರಿಕೆಗಳಲ್ಲಿನ ಅಂಕಣ, ಬರಹಗಳು, ಪ್ರವಚನಗಳು ಮತ್ತು ವಿವಿಧ ಮಾಧ್ಯಮಗಳ ಚರ್ಚೆಯಗಳಲ್ಲಿ ನಮ್ಮ ನಾಡು, ನುಡಿ, ಸಂಸ್ಕೃತಿ, ಸಂಪ್ರದಾಯ ಮತ್ತು ಸಂಸ್ಕಾರಗಳ ಬಗ್ಗೆ ಆಧಿಕಾರಯುತವಾಗಿ ಆರ್ಥಪೂರ್ಣ ವಿಷಯಗಳನ್ನು ಪ್ರತಿಪಾದಿಸುವ ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಕನ್ನಡ, ಸಂಸ್ಕೃತ, ತಮಿಳು, ಇಂಗ್ಲೀಷ್ ಭಾಷಾ ಕೋವಿದರ ದೇಹಾಂತ್ಯವು ಸಾಹಿತ್ಯವಲಯಕ್ಕೆ ದುಃಖ ತಂದಿದೆ. ಅವರ ಕೃತಿಗಳ ಮೂಲಕ ಸದಾಕಾಲ ಅವರು ಅವರು ನನಪಿನಲ್ಲಿ ಉಳಿಯಲಿದ್ದಾರೆ.

ಆಚಾರ್ಯರಿಗೆ ಶಿರಸಾ ನಮಾಮಿ
ಮನಸಾ ಸ್ಮರಾಮಿ

ದುಃಖತೃಪ್ರ ಓದುಗ
ರಾಮಕೃಷ್ಣ ಬೆಳ್ಳೂರು

Foremost scholar of Indology ( author of 400+ books in Kannada & English ), Professor Dr. K.S. Narayanacharya, an erudite scholar of Ramayana no more.

Pravachanakalanidhi, Sri Ramayanacharya, Vedabhushana, Mahabharathacharya, Bhagavathacharya, Panditharaja Sriyutha Dr.K.S.Narayanacharya attained Acharyan Thiruvadi at 2:06 am 26-11-2021.

Sri Narayanacharya’s mastery over the religious texts and his sharp memory even at the age of 88 was mind-blowing. It was our sukrutha listening to the intricate details he gave about the Vedas, Puranas, Samhitas, Upanishads, Itihasa, Kavya, sacred scriptures, the mythological and historical characters between the lectures. The audience loved it when he connected the historical/ mythological events/ characters to contemporary events/ characters, esp. to politics.

Below message from Sri KSN’s family:
It is with the greatest regret * we are saddened to inform all his ardent followers that Acharyan Dr Ubhaya Vedanta Pravartakarar – KS Narayanacharya – our very beloved father attained Acharyan Thiruvadi. At 2:06 am 26-11-2021

K S NARAYANACHAR Family 😢😢😢🙏🏻🙏🏻🙏🏻🙏🏻

Below message from Sri Venkatesh, ardent follower of Acharya:

ಆಚಾರ್ಯರ ಕುಟುಂಬಕ್ಕೆ, ಶಿಷ್ಯ ವೃಂದ ಹಾಗೂ ಅಭಿಮಾನಿಗಳಿಗೆ ಭರಿಸಲಾಗದ ದುಃಖ‌. ಇಂದು ಶ್ರೀ ವೈಷ್ಣವ ಸಾರಸ್ವತ ಲೋಕದಲ್ಲಿ ಧ್ರುವತಾರೆ ಅಸ್ತಂಗತವಾಗಿ ದಾರಿ ತೋರಿಸುವ ದೀವಿಟಿಗೆ ನಂದಿಹೋದಂತಾಗಿದೆ. ಆದರೆ ಅವರು ನಮಗೆ ನೀಡುರುವ ಉಪನ್ಯಾಸಗಳು ಭಗವದ್ವಿಷಯ ಕಾಲಕ್ಷೇಪ ಗ್ರಂಥಗಳು ಮತ್ತು ರಾಷ್ಟ್ರೀಯ ವಿಚಾರಧಾರೆ ಅಪಾರವಾದ ಕೊಡುಗೆಗಳು ಅಜರಾಮರವಾಗಿ ಇರಲಿದೆ. ಅವರ ಅಗಲಿಕೆ ಸತ್ಸಂಪ್ರದಾಯಕ್ಕೆ ಭರಿಸಲಾಗದ ಅಪಾರವಾದ ನಷ್ಟ ಉಂಟಾಗಿದೆ. ಅಂತಿಮವಾಗಿ ಶ್ರೀಸೀತಾರಾಮ ಪಾದುಕಾ ಸೇವೆಯನ್ನು ಮಾಡುವ ಸಲುವಾಗಿ ಶಾಶ್ವತವಾಗಿ ಪರಂಧಾಮಕ್ಕೆ ಮರಳಿದ್ದಾರೆ. ಅವರಿಗೆ ಇಹಲೋಕದಲ್ಲಿ ನಮ್ಮಂತಹ ಸಾಮಾನ್ಯ ಜನರಿಗೆ ಸನ್ಮಾರ್ಗ ತೋರಲೆಂದೇ ಈ ಧರೆಯಲ್ಲಿ ಅವತರಿಸಿದ ಮಹೋನ್ನತ ವ್ಯಕ್ತಿತ್ವದ ಆಚಾರ್ಯರು. ಅದರಲ್ಲೂ ಸುಲಲಿತವಾದ ರಸದೌತಣವಾದ ಕನ್ನಡದಲ್ಲಿ ಭಗವದ್ವಿಷಯ ಮೃಷ್ಟಾನ್ನದ ಭೋಜನದ ರುಚಿ ಯನ್ನು ನಮಗೆಲ್ಲ ತೋರಿಸಲೆಂದೇ ಈ ಧರೆಯಲ್ಲಿ ಅವತರಿಸಿದ ನಿತ್ಯಸೂರಿಗಳು. ಅವರಗಲಿಕೆಯು ಇನ್ನು ಅನೇಕ ಕೃತಿಗಳ ಬರವಣಿಗೆ ಕೆಲಸಗಳು, ಉಪನ್ಯಾಸ ಕಾರ್ಯಕ್ರಮಗಳು, ಮತ್ತು ಮುಖ್ಯವಾಗಿ ಅಂತಿಮವಾಗಿ ಅಯೋಧ್ಯೆ ಶ್ರೀ ರಾಮ ದೇಗುಲದ ಆವರಣದಲ್ಲಿ ಶ್ರೀರಾಮಾಯಣ ಪ್ರವಚನ ಕೇಳಲು ಕಾದಿದ್ದ ಶ್ರೀರಾಮಚಂದ್ರ ಸ್ವಾಮಿಗೂ ಪರಿವಾರದವರಿಗೂ ನಿರಾಸೆ ಮೂಡಿರುವುದರಲ್ಲಿ ಸಂದೇಹವೇ ಇಲ್ಲ. ಇದುವೇ ತುಂಬಲಾರದ ನಷ್ಟ.

Solar Eclipse June 21, 2020!

June 21, 2020

ಯೋಗವಿದ್

June 20, 2020

[Click on the image to enlarge]

ಯೋಗವಿದ್
ರಚನೆ: ರಾಮಕೃಷ್ಣ ಬೆಳ್ಳೂರು

ಯೋಗಪತಿಯು ಯೋಗನಾಥನು ಯೋಗಮೂರ್ತಿಧರನು
ಯೋಗಸ್ಥನೂ ಯೋಗಾಚಾರ್ಯನು ಆದ ಯೋಗಪುರುಷನು
ಯೋಗನಿದ್ರೆಯಲ್ಲಿ ಯೋಗಬಲದಿ ಯೋಗದರ್ಶನ ಪಡೆದು
ಯೋಗಶಾಸ್ತ್ರ; ಯೋಗಸಾರ; ಯೋಗಾಸನ; ಯೋಗಫಲಗಳನ್ನಡಗಿಸಿ
ಯೋಗಸಮಾಧಿಯಲ್ಲಿದ್ದ ಯೋಗಾತ್ಮರಾದ ವಸಿಷ್ಠರೊಡನೆ
ಯೋಗೀಶ್ವರನು ನಡೆಸಿದ ಸಂವಾದವೇ ಯೋಗವಾಸಿಷ್ಠವೆಂಬುದನ್ನು
ಯೋಗಾಭ್ಯಾಸಕ್ಕೆ ಯೋಗಾಭ್ಯಾಸಿಗೆ ಅವಶ್ಯವಾದ
ಯೋಗವಾಹಿಯೆಂಬ ಯೋಗಶಿಕ್ಷೆಯಲ್ಲಿರುವ
ಯೋಗವಿದ್ಯೆಯ ಯೋಗಾಂಗದ ಯೋಗಾಮೃತವನ್ನರಿಯಲು
ಯೋಗಪಥದಲ್ಲಿರುವ ಯೋಗಾನುಶಾಸನ ಪಡೆಯಲು
ಯೋಗಯುಕ್ತನಾದ ಯೋಗಯುಕ್ತಿಯು, ಯೋಗಧರ್ಮಿಯು
ಯೋಗಾಂಜನವ ಲೇಪಿಸಿಕೊಂಡು ಯೋಗಜನಾಗಿ
ಯೋಗರಥದಲ್ಲಿ ಏರಿ ಯೋಗವಾಹಿನಿಯ
ಯೋಗವಾಣಿಯ ಆಣತಿಯಂತೆ
ಯೋಗಾನಂದದಿ ಯೋಗತತ್ವೋಪನಿಷತ್ತಿನಲ್ಲಡಗಿರುವ
ಯೋಗಸೂತ್ರ, ಹಠಯೋಗ ಮತ್ತು ಕುಂಡಲಿನಿ ಯೋಗಗಳ
ಯೋಗತ್ವ ಪಡೆಯುವುದೇ ಸುಯೋಗವೆಂದರಿತು
ಯೋಗಪಾರಂಗತನಾದ ಯೋಗಸ್ವಾಮಿಯ ಸಹಯೋಗದಿಂದ
ಯೋಗೈಶ್ವರ್ಯ ಪ್ರಸಾದ ಪಡೆದು ಯೋಗಸೇವಾನಿರತನಾಗಿ
ಯೋಗದ ಯೋಗ್ಯತೆಯಿರುವ ಯೋಗ್ಯರ ಯೋಗಕ್ಷೇಮ ವಹಿಸಿ
ಯೋಗಸಂಸಿದ್ಧಿಯತ್ತ ನೀಡುತ್ತಿದ್ದಾನೆ ತನ್ನ ಯೋಗದಾನ

Also read: ಯೋಗ

Dwadasha Jyotirlinga using Mathematical Symbols

February 20, 2020

Dwadasha Jyotirlinga using Mathematical Symbols

 

***

ಕನ್ನಡದ ಅಕ್ಷರಗಳಲ್ಲಿ ದ್ವಾದಶ ಜ್ಯೋತಿರ್ಲಿಂಗ
ಕಲೆ+ತಲೆ: ಬೆಳ್ಳೂರು ರಾಮಕೃಷ್ಣ

16996426_860007537474578_6037674401948233471_n

ಶಿವನಿಲ್ಲದ ಸ್ಥಳವುಂಟೆ?

VYANGYA CHITRAAVADHAANA: A TRIBUTE TO SHATAAVADHAANI DR.R.GANESH

January 6, 2020

ಯೋಗ

June 21, 2019

[Click on the image to enlarge]

ಯೋಗ
ರಚನೆ: ರಾಮಕೃಷ್ಣ ಬೆಳ್ಳೂರು

ಛಂದಸ್ಸಿಗನುಗುಣವಾಗಿ ಬರೆಯುವುದು ಅಧ್ವಯೋಗ
ಕಾವ್ಯವನ್ನು ರಚಿಸುವುದು ಅಭಿಯೋಗ

ಪುರುಷರಿಗೆ ಲಕ್ಷಣ ಉದ್ಯೋಗ
ದೇಶದ ಸಮಸ್ಯೆಗಳಲ್ಲೊಂದು ನಿರುದ್ಯೋಗ

ಎಂದಿಗೂ ಕಾಯಕ ಮಾಡುವುದೇ ಕರ್ಮಯೋಗ
ದೇವರನ್ನು ಸ್ಮರಿಸುವುದು ಭಕ್ತಿಯೋಗ

ಕಲ್ಪವೃಕ್ಷದಿಂದ ನಮಗೆಷ್ಟು ಉಪಯೋಗ
ತಂದೆ ತಾಯಿಯರ ಸೇವೆ ಮಾಡುವುದೇ ಸುಯೋಗ

ಕಲೆಯಲ್ಲಿ ಮಾಡಿದ ಪ್ರಯೋಗ
ಸಾರ್ಥಕ್ಯ ಪಡೆಯುವುದು ಆದಾಗ ಸದುಪಯೋಗ

ಏಕಾಗ್ರಚಿತ್ತವಾಗಿರಲು ಮಾಡಬೇಕು ಹಠಯೋಗ
ಮಾಡಬಾರದು ಸಂಪನ್ಮೂಲಗಳ ದುರುಪಯೋಗ

ಪ್ರತಿದಿನ ಪಾಲಿಸಬೇಕಾದ ಯೋಗ
ಜೀವನ ಧರ್ಮ ಯೋಗ

ಸರ್ಕಾರ ದೇಶವನ್ನು ಪರಿವರ್ತಿಸಲು ಸೃಷ್ಟಿಸಿದೆ ನೀತಿ ಆಯೋಗ
ಧೃತರಾಷ್ಟ್ರ ಪಾಂಡು ವಿದುರ ಹುಟ್ಟಿದ್ದ ವಿಧಿ ನಿಯೋಗ

ಬ್ರಹ್ಮ ತತ್ವ ತಿಳಿಯಲು ಬೇಕು ದೈವಯೋಗ
ಸಾಫಲ್ಯತೆ ಪಡೆಯುವುದೇ ನಿತ್ಯ ಯೋಗ

ವಿದ್ಯಾಧಿದೇವತೆ ಅನುಗ್ರಹಿಸಿದರೆ ಸಿಗುವುದು ಅಕ್ಷರ ಯೋಗ
ಹೊರನಾಡ ದೇವತೆ ವರವಿತ್ತರೆ ದಿನವೂ ಅನ್ನ ಯೋಗ

ದೇಶದ ಬೆನ್ನೆಲುಬಾದ ರೈತರಿಗೆ ಬೇಕು ಕೃಷಿ ಯೋಗ
ವಂಶ ಬೆಳೆಯಲು ಭಗವಂತ ಕರುಣಿಸಬೇಕು ಸಂತಾನ ಯೋಗ

ಮಂತ್ರ ತಂತ್ರ ಯಂತ್ರಗಳಿಂದ ಸೂಕ್ಷ್ಮವನ್ನು ಜಾಗೃತಗೊಳಿಸಲು ಕಲಿಯಬೇಕು ಕುಂಡಲಿನಿ ಯೋಗ
ಮಾಯೆಯಿಂದ ಮುಕ್ತನಾಗುವುದೇ ರಾಜ ಯೋಗ

ಸಕಾಲಕ್ಕೆ ಮಳೆಬರಲು ಬೇಕು ವರ್ಷ ಯೋಗ
ಲಕ್ಷ್ಮಿಯ ೨೩ನೆ ನಿತ್ಯ ನೈಸರ್ಗಿಕ ಯೋಗವೇ ಶುಭಯೋಗ

ಶೋಕಿಸಬೇಕು ನಾವು ಭಗವಂತನಿಂದ ಆಗಿದ್ದಕ್ಕೆ ವಿಯೋಗ
ಯೋಗ ಮಾರ್ಗ ವಿಷಮವಾದರೂ ವಿವೇಕ ಹೊಂದಲು ಬೇಕು ಜ್ಞಾನಯೋಗ

ಪ್ರತ್ಯಕ್ಷ ಅನುಮಾನ ಮತ್ತು ಶಬ್ದಗಳ ಪ್ರಮಾಣ ಒಪ್ಪುವುದು ಸಾಂಖ್ಯ ಯೋಗ
ಆತ್ಮ ಸಾಕ್ಷಾತ್ಕಾರದತ್ತ ಅರ್ಜುನನನ್ನು ಕಳುಹಿಸಿದ್ದೆ ವಿಷಾದ ಯೋಗ

ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧಾರಣ ಧ್ಯಾನ ಸಮಾಧಿಗಳೇ ಅಷ್ಟಾಂಗಯೋಗ
ಯೋಗ ದಿವಸದಂದು ಈ ಸಾಲುಗಳು ಬರೆದಿದ್ದು ಯೋಗ ಭಾವನೆಗಳ ಸಂಯೋಗ

Santa Claus Jokes and Christmas one liners

December 25, 2017

Difference betw. we commoners and Santa? We say “Oho ho” while he says “Hohoho”!

***

Using Nirukta (etymological derivation) we can interpret ‘Santa Claus’ as ‘शान्त क्लोश’, who brings world peace, gifts and happiness, and who pacifies the crying!

***

What is common between Ganesha and Jesus? During their bday, we utter their Mom’s name first.
Happy Gowri Ganesha !
‘Merry (Mary)’ Christmas !

***

Which Dr.Raj’s film will be read differently during X-mas?
SANTA Tukaram.

***

HBD SantAtal !

***

Sringeri Shankara Mutt wallpapers design by RK Bellur

July 15, 2017

To the goddess and Jagadgurus who have blessed me with all good things.

 

ರಾಜ ಪಂಚಾಶತ್

June 21, 2017

ರಾಜ ಪಂಚಾಶತ್
ರಚನೆ: ರಾಮಕೃಷ್ಣ ಬೆಳ್ಳೂರು

ರಾಜಮಾರ್ಗದಿ
ರಾಜರ್ಷಿಯ ಧ್ಯಾನದಿ
ರಾಜಕಾರ್ಯಾಸಕ್ತರಾಗಿ
ರಾಜವೈಭೋಗವ ಅನುಭವಿಸಿ
ರಾಜಭಟನೆಂಬ
ರಾಜಪದವಿ ಪಡೆದು
ರಾಜವಂಶಸ್ಥರಾಗಿ
ರಾಜಠೀವಿಯಿಂ
ರಾಜಕೀಯಕ್ಕೆ ಹೋಗದೆ
ರಾಜಕುಲದವರಾಗಿ
ರಾಜಮಂದಿರದಿ ನೆಲೆಸಿ
ರಾಜ ಲಕ್ಷಣ ಹೊಂದಿರುವ
ರಾಜ ಸದನದಿ
ರಾಜಭವನವಲಂಕರಿಸಿ
ರಾಜಚಿಹ್ನೆಗೆ
ರಾಜತ್ವ ಇತ್ತು
ರಾಜತರುವಂತಿರುವ
ರಾಜರತ್ನಮಾಲೆ ಧರಿಸಿದ
ರಾಜರಾಜೇಂದ್ರನಂತಿರುವ
ರಾಜಕಳೆ ಉಳ್ಳ
ರಾಜೋಪಚಿತ ನಡೆನುಡಿಯುಳ್ಳ
ರಾಜಕುಮಾರನಿಂದ
ರಾಜಧರ್ಮವ ಕಲೆತು
ರಾಜಧಾನಿಯಿಂದಾಚೆಗೂ
ರಾಜನೀತಿ ತಿಳಿಸಿ
ರಾಜ ಪಟ್ಟ ಗಳಿಸಿದ
ರಾಜಪುತ್ರರರೊಡನೆ
ರಾಜಪೂಜಿತರಾಗಿ
ರಾಜಬೀದಿಯಲ್ಲಿ
ರಾಜ ಮರ್ಯಾದೆಯೊಂದಿಗೆ
ರಾಜಮಾನ್ಯರೆನಿಸಿ
ರಾಜಮುದ್ರೆ ಹೊಂದಿ
ರಾಜಾಶ್ರಯದಲ್ಲಿ
ರಾಜಯೋಗ್ಯತೆ ಪಡೆದು
ರಾಜವಂತರಾಗಿ
ರಾಜ ವೈದ್ಯರೊಡನೆ
ರಾಜ ವಿದ್ಯೆ ಕಲೆತು
ರಾಜ ಶಾಸನದಿ
ರಾಜ ಶಿರೋಮಣಿಗೆ
ರಾಜಶೇಖರನ
ರಾಜಶ್ರೀ ಸಮೇತ
ರಾಜಲಿಂಗವ ಪೂಜಿಸಿ
ರಾಜ ಸಭೆಯಲ್ಲಿ
ರಾಜಸೂಯ ಮಾಡುತ್ತ
ರಾಜಸೇವೆಯಲ್ಲಿ
ರಾಜಹಂಸದಿ ವಿಹರಿಸಿ
ರಾಜಕಾರ್ಯಾನಿರತರಾಗಿ
ರಾಜಾಜ್ಞೆಯ ಪಾಲಿಸುತ್ತ
ರಾಜಾಧಿರಾಜನ ಧ್ಯಾನದಲ್ಲಿರುವುದೇ
ರಾಜಯೋಗ
ಇದಲ್ಲವೇ ರಾಜಧರ್ಮರಾಜಯೋಗ